ಎಂಥ ಚೆಂದ ನಿನ್ನ ರೂಪು

ಎಂಥ ಚೆಂದ ನಿನ್ನ ರೂಪು ಭುವನೇಶ್ವರಿ
ಕಣ್ಣು ತುಂಬಿ ತುಳುಕುತೈತೆ ನಿನ್ನೈಸಿರಿ /ಪ//

ಹಸಿರು ಬಳ್ಳಿ ಮುಡಿಯಲ್ಲಿರೊ ದುಂಡು ಮಲ್ಲಿಗೆ
ಚಿಗುರು ಎಲೆಯ ಮರೆಯಲ್ಲಿರೊ ಕೆಂಡ ಸಂಪಿಗೆ
ನಿನ್ನ ರೂಪು ತೋರುತೈತೆ ಗಂಧ ಬೀರುತ್ತ
ಹೇಗೊ ಮೋಡಿ ಮಾಡುತೈತೆ ರಂಗು ತಾಳುತ್ತ

ಗೆಜ್ಜೆ ಇಲ್ದೆ ಹೆಜ್ಜೆ ಹಾಕಿ ನಾಟ್ಯ ನವಿಲು
ತಾಳ ತಂತಿ ಇಲ್ಲದೇನೆ ಗಿಳಿಯ ಕೊರಳು
ಸೋಜಿಗವ ಸೂಸುತೈತೆ ಬಿಂಕ ಬೀರುತ್ತ
ನಿನ್ನ ಸತ್ಯ ಸಾರುತೈತೆ ಸದ್ದು ಮಾಡುತ್ತ

ಬೆಟ್ಟ ಗುಡ್ಡ ಬಯಲು ಸಾಲು ನೀಲಿ ಸಾಗರ
ಕಾಣದಂತೆ ಬೀಸಿ ಬರುವ ಗಾಳಿ ಚಾಮರ
ನಿನ್ನ ಲೀಲೆ ಹಾಡುತೈತೆ ಮೌನ ತಾಳುತ್ತ
ಸೃಷ್ಟಿ ಗುಟ್ಟು ರಟ್ಮಾಡೈತೆ ನಿನ್ನ ತೋರುತ್ತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆ
Next post ಶೌಚ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys